ಉಡುಪಿ ಜಿಲ್ಲೆ
ಕರ್ನಾಟಕದ ಒಂದು ಪ್ರದೇಶ / From Wikipedia, the free encyclopedia
ಉಡುಪಿ (Tulu: ಒಡಿಪು) ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಶುದ್ಧವಾದ ವೈಷ್ಣವಮತ ಪ್ರತಿಪಾದಿಸಿದ ತ್ರೈಲೋಕ್ಯಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಶ್ರೀ ವ್ಯಾಸತೀರ್ಥರು, ಶ್ರೀಮದ್ ವಾದಿರಾಜ ತೀರ್ಥರು, ಶ್ರೀರಾಘವೇಂದ್ರ ತೀರ್ಥ ಗುರುರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು ಈ ಎಲ್ಲ ಮಹನೀಯರೂ ಸಹ ಶ್ರೀಮನ್ ಮಧ್ವಾಚಾರ್ಯರನ್ನು ನಿತ್ಯ ಉಪಾಸಿಸುವ, ಅವರ ಅನುಯಾಯಿಗಳೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ತಿತ್ವಕ್ಕೆ ಬಂದಿತು. ಉತ್ತರದ ನಾಲ್ಕು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ಹೆಬ್ರಿಗಳನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಬ್ರಹ್ಮಾವರ ತಾಲೂಕನ್ನು ೨೦೧೮ರಲ್ಲಿ ರೂಪಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೧೧ ರಂತೆ) ೧೧,೭೭,೩೬೧ ಇದರಲ್ಲಿ ೫,೩೨,೧೩೧ ಜನ ಪುರುಷರು ೬,೧೫,೨೩೦ ಮಹಿಳೆಯರು ಇದ್ದಾರೆ.
Quick Facts ಉಡುಪಿ(ಒಡಿಪು) ಒಡಿಪು, ದೇಶ ...
ಉಡುಪಿ(ಒಡಿಪು)
ಒಡಿಪು | |
---|---|
Temple City | |
ದೇಶ | ಭಾರತ |
ರಾಜ್ಯ | ಕರ್ನಾಟಕ |
Region | ತುಳುನಾಡು |
ಜಿಲ್ಲೆ | ಉಡುಪಿ |
Government | |
• Type | City Municipal Council |
• Council President | Divakar Shetty |
Area | |
• Total | ೬೮.೨೩ km೨ (೨೬.೩೪ sq mi) |
Elevation | ೩೯ m (೧೨೮ ft) |
Population | |
• Total | ೧,೬೫,೪೦೧ |
• Density | ೨,೪೦೦/km೨ (೬,೩೦೦/sq mi) |
Time zone | UTC+5:30 (IST) |
PIN | 576101 (City) |
Telephone code | 0820 |
Vehicle registration | ಕೆಎ ೨೦ |
Website | www |
"Udupi - The Temple City" |
Close