ಕಾಜಿ ನಜ್ರುಲ್ ಇಸ್ಲಾಮ್
ಬಾಂಗ್ಲಾದೇಶದ ಲೇಖಕರು / From Wikipedia, the free encyclopedia
ಕಾಜಿ ನಜ್ರುಲ್ ಇಸ್ಲಾಮ್ (ಬಂಗಾಳಿ:কাজী নজরুল ইসলাম ಕಾಜಿ ನೊಜ್ರುಲ್ ಇಸ್ಲಾಮ್ ) (25 ಮೇ 1899–27 ಆಗಸ್ಟ್ 1976) ಇವರೊಬ್ಬ ಬೆಂಗಾಳಿ ಕವಿ, ಸಂಗೀತಗಾರ ಮತ್ತು ಕ್ರಾಂತಿಕಾರೀ ವ್ಯಕ್ತಿಯಾಗಿದ್ದರು.ಅವರು ಉಗ್ರ ಬಲಪಂಥೀಯ ಫ್ಯಾಸಿಸಮ್ ವಿರುದ್ದ ಮತ್ತು ತುಳಿತಕ್ಕೊಳಗಾದವರ ಬಗ್ಗೆ ಕಾಳಜಿ ತೋರುವ ತತ್ವದ ಪ್ರವರ್ತಕರಾಗಿದ್ದರು.ಅವರೊಬ್ಬ ದಿಟ್ಟ ಹೋರಾಟದ ಕವಿ ಹೃದಯದವರಾಗಿದ್ದರು. ಅವರ ಕಾವ್ಯ ಮತ್ತು ರಾಷ್ಟ್ರೀಯತೆಯ ಚಟುವಟಿಕೆಗಳಿಗಾಗಿ ಅವರಿಗೆ ಜನಪ್ರಿಯ ಹೆಸರಾದ ಬಿದ್ರೊಹಿ ಕೊಬಿ (ಕ್ರಾಂತಿಕಾರಿ ಕವಿ) ಎಂಬ ಉಪನಾಮ ನೀಡಲಾಗಿತ್ತು. ಅವರ ಬೃಹತ್ ಪ್ರಮಾಣದ ಸಾಹಿತ್ಯಕ ಬರೆಹದಿಂದಾಗಿ ಅವರು ಜೀವಮಾನವಿಡೀ ಮಾಡಿದ ಸಾಧನೆಗಾಗಿ ಅವರನ್ನು ಬಾಂಗ್ಲಾದೇಶದ ರಾಷ್ಟ್ರೀಯ ಕವಿ ಎಂದು ಅಧಿಕೃತವಾಗಿ ಗುರುತಿಸಲಾಗುತ್ತಿತ್ತು.ಭಾರತದಲ್ಲಿ ಅವರ ಜ್ಞಾಪಕಾರ್ಥ ಚಟುವಟಿಕೆಗಳೂ ನಡೆಯುತ್ತವೆ.
- ಅವರ ತತ್ವಶಾಸ್ತ್ರೀಯ ಕೃತಿಗಳಿಗಾಗಿ, ಕೆಳಗಿನ ಮಾಹಿತಿ ಪೆಟ್ಟಿಗೆ ವೀಕ್ಷಿಸಿ.
ಬಡ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ನಜ್ರುಲ್ ಆರಂಭದಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಮಸೀದೆಯಲ್ಲಿ ಮ್ಯುಸಿಯೆನ್ ಮಹಮ್ಮದೀಯ ಘೋಷಕನಾಗಿ ಸ್ಥಳೀಯ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ರಂಗ ತರಬೇತಿ ಶಿಕ್ಷಣದಲ್ಲಿ ಕಾವ್ಯ,ನಾಟಕ ಮತ್ತು ಸಾಹಿತ್ಯದ ಬಗ್ಗೆ ಕಲಿತುಕೊಂಡರು. ಬ್ರಿಟಿಶ್ ಇಂಡಿಯನ್ ಆರ್ಮಿಯಲ್ಲಿ ಕೆಲ ಕಾಲ ಸೇವೆ ಮಾಡಿದ ನಜ್ರುಲ್ ಕೊಲ್ಕತ್ತಾದಲ್ಲಿ ಪತ್ರಕರ್ತನಾಗಿ ನೆಲೆಯಾದರು.(ಆವಾಗ ಇದು ಕಲ್ಕತ್ತಾ ಆಗಿತ್ತು) ಅವರು ಭಾರತದಲ್ಲಿನ ಬ್ರಿಟಿಶ್ ರಾಜ್ ವನ್ನು ವಿರೋಧಿಸಿದರಲ್ಲದೇ ತಮ್ಮ ಕವಿ-ಕಾವ್ಯದಿಂದ ಕ್ರಾಂತಿಯನ್ನು ಭೋದಿಸಿದರು.ಉದಾಹರಣೆಗೆ "ಬಿದ್ರೊಹಿ"(ದಿ ರೆಬೆಲ್)ಮತ್ತು "ಭಂಗಾರ್ ಗಾನ್ (ದಿ ಸಾಂಗ್ ಆಫ್ ಡಿಸ್ಟ್ರಕ್ಷನ್-ವಿನಾಶದ ಹಾಡು)ಅದಲ್ಲದೇ ಅವರದೇ ಆದ ಪ್ರಕಟನೆ "ಧೂಮಕೇತು" (ದಿ ಕಾಮೆಟ್)ಅವರ ನೆರವಿಗಿದ್ದವು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿನ ಅವರ ಭಾವೋದ್ರೇಕಿತ ಕಾರ್ಯಚಟುವಟಿಕೆ ಬ್ರಿಟಿಶ್ ಸರ್ಕಾರ ಅವರನ್ನು ಸೆರೆಮನೆಗೆ ಅಟ್ಟಿತು. ಅವರು ಸೆರೆಮನೆಯಲ್ಲಿದ್ದಾಗ "ರಾಜ್ಬಂದಿರ್ ಜಬನ್ಬಂದಿ" (ಡಿಪೊಜಿಶನ್ ಆಫ್ ಪೊಲಿಟಿಕಲ್ ಪ್ರಿಜನರ್) ಎಂಬ ಕೃತಿ ರಚಿಸಿದರು. ಭಾರತ ಬಹುಜನರ ಶೋಷಣೆ-ಬವಣೆಗಳ ಬಗ್ಗೆ ಬರೆದ ನಜ್ರುಲ್ ಅವರ ಉದ್ದಾರಕ್ಕಾಗಿ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ.
ನಜ್ರುಲ್ ಅವರ ಬರೆಹಗಳು ಪ್ರೀತಿ,ಸ್ವಾತಂತ್ರ್ಯ ಮತ್ತು ಕ್ರಾಂತಿಯ ಬಗ್ಗೆ ವಿವರಿಸಿವೆ;ಅವರು ಎಲ್ಲಾ ತರಹದ ಮತಾಂಧತೆಯನ್ನು ವಿರೋಧಿಸಿದ್ದಾರೆ.ಅವಲ್ಲದೇ ಧಾರ್ಮಿಕ ಮತ್ತು ಲಿಂಗ ತಾರತಮ್ಯವನ್ನೂ ವಿರೋಧಿಸಿದ್ದಾರೆ. ಅವರ ಜೀವನದುದ್ದಕ್ಕೂ ನಜ್ರುಲ್ ಸಣ್ಣ ಕಥೆಗಳು,ಕಾದಂಬರಿಗಳು ಮತ್ತು ಪ್ರಭಂಧಗಳನ್ನು ಬರೆದಿದ್ದರೂ ತಮ್ಮ ಜನಪ್ರಿಯ ಕವಿತೆಗಳಿಗಾಗಿ ಪ್ರಸಿದ್ದರಾಗಿದ್ದಾರೆ.ಅದಲ್ಲದೇ ನೂತನವಾಗಿ ಬೆಂಗಾಳಿ ಘಜಲ್ ಗಳ ಪ್ರವರ್ತಕರೆನಿಸಿದ್ದಾರೆ. ನಜ್ರುಲ್ ತಮ್ಮದೇ ಆದ 4,000 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.(ಇದರಲ್ಲಿ ಗ್ರಾಮೊಫೊನ್ ರೆಕಾರ್ಡ್ಸ್ ಗಳೂ [1] ಸೇರಿವೆ)ಇವುಗಳ ಸಂಗ್ರಹಕ್ಕೆ ನಜ್ರುಲ್ ಗೀತಿ (ನಜ್ರುಲ್ ಹಾಡುಗಳು)ಎನ್ನಲಾಗುತ್ತದೆ,ಅವು ಇಂದು ಎಲ್ಲೆಡೆಯೂ ಪ್ರಖ್ಯಾತವಾಗಿವೆ. ಅವರು ತಮ್ಮ 43 ನೆಯ ವಯಸ್ಸಿನಲ್ಲಿ ಅನಾಮಿಕ ಖಾಯಿಲೆಯೊಂದರಿಂದ ಬಳಲಿದಾಗ ಅದರಿಂದ ಅವರ ಧ್ವನಿ ಮತ್ತು ಜ್ಞಾಪಕ ಶಕ್ತಿ ಕುಂದಿದವು. ಅದನ್ನು ಬಹುತೇಕರು ಬ್ರಿಟಿಶ್ ಸರ್ಕಾರವು ಅವರಿಗೆ ನಿಧಾನವಾಗಿ ವಿಷ ಉಣಿಸಿದೆ ಎಂದು ಹೇಳುತ್ತಿದ್ದರು. ಈ ಕಾಯಿಲೆ ಅವರ ಆರೋಗ್ಯ ಕ್ಷೀಣಿಸಲು ಕಾರಣವಾಯಿತಲ್ಲದೇ ಅನಿವಾರ್ಯವಾಗಿ ಅವರು ಹಲವು ವರ್ಷಗಳ ಕಾಲ ಒಂಟಿ ಬದುಕು ಸಾಗಿಸಬೇಕಾಯಿತು. ಬಾಂಗ್ಲಾದೇಶ ಸರ್ಕಾರದ ಆಮಂತ್ರಣದ ಮೇರೆಗೆ ನಜ್ರುಲ್ ಮತ್ತು ಅವರ ಕುಟುಂಬವು 1972 ರಲ್ಲಿ ನಾಲ್ಕು ವರ್ಷಗಳ ಅನಂತರ ಢಾಕಾಗೆ ಸ್ಥಳಾಂತರವಾಯಿತು.