ರಾಹುಲ್ ದ್ರಾವಿಡ್
ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಪ್ರಸಕ್ತ ಕೋ / From Wikipedia, the free encyclopedia
ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ ೧೧, ೧೯೭೩) - ಇವರು ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಸ್ಥಾನ ಪಡೆದ ಭಾರತೀಯ. ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿ ವಿಶ್ವದ ೬ನೇ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.[1] ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ನಂತರ ರಾಹುಲ್ ದ್ರಾವಿಡ್ ಮೂರನೇ ಭಾರತೀಯ. ಇವರು ಅಕ್ಟೋಬರ್ ೨೦೦೫ರಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿ, ಸೆಪ್ಟೆಂಬರ್ ೨೦೦೭ ರಲ್ಲಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.[2] ರಾಹುಲ್ ಡ್ರಾವಿಡ್ ಭಾರತೀಯ ಪ್ರಿಮಿಯರ್ ಲೀಗ್ ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ೨ ವರ್ಷ್ 'ಐಕಾನ್ ಆಟಗಾರ'ನಾಗಿ ಆಡಿ, ಜೈಪೂರದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್ | |||||||||
ಭಾರತ | |||||||||
ವೈಯಕ್ತಿಕ ಮಾಹಿತಿ | |||||||||
---|---|---|---|---|---|---|---|---|---|
ಪೂರ್ಣಹೆಸರು | ರಾಹುಲ್ ಶರದ್ ದ್ರಾವಿಡ್ | ||||||||
ಅಡ್ಡಹೆಸರು | ದಿ ವಾಲ್, ಜ್ಯಾಮಿ | ||||||||
ಹುಟ್ಟು | ಜನವರಿ ೧೧ ೧೯೭೩ | ||||||||
ಇಂದೋರ್, ಮಧ್ಯ ಪ್ರದೇಶ, ಭಾರತ | |||||||||
ಪಾತ್ರ | ಬಾಟ್ಸ್ಮನ್, ಓಮ್ಮೊಮ್ಮೆ ವಿಕೆಟ್ ಕೀಪರ್ | ||||||||
ಬ್ಯಾಟಿಂಗ್ ಶೈಲಿ | ಬಲಗೈ | ||||||||
ಬೌಲಿಂಗ್ ಶೈಲಿ | ಬಲಗೈ ಆಫ್ ಸ್ಪಿನ್ | ||||||||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | |||||||||
ಟೆಸ್ಟ್ ಪಾದಾರ್ಪಣೆ (cap ೧೫೮) | ಜೂನ್ ೨೦ ೧೯೯೬: v ಇಂಗ್ಲೆಂಡ್ | ||||||||
ಕೊನೆಯ ಟೆಸ್ಟ್ ಪಂದ್ಯ | ಜನವರಿ ೨೪ ೨೦೧೨: v ಆಸ್ಟ್ರೇಲಿಯ | ||||||||
ODI ಪಾದಾರ್ಪಣೆ (cap ೩೪೪) | ಏಪ್ರಿಲ್ ೩ ೧೯೯೬: v ಶ್ರೀಲಂಕಾ | ||||||||
ಕೊನೆಯ ODI ಪಂದ್ಯ | ಸೆಪ್ಟೆಂಬರ್ ೧೬ ೨೦೧೧: v ಇಂಗ್ಲೆಂಡ್ | ||||||||
ODI ಅಂಗಿಯ ಸಂಖ್ಯೆ | ೧೯ | ||||||||
ಪ್ರಾದೇಶಿಕ ತಂಡದ ಮಾಹಿತಿ | |||||||||
ವರ್ಷಗಳು | ತಂಡ | ||||||||
೧೯೯೦ – ಪ್ರಸ್ತುತ | ಕರ್ನಾಟಕ | ||||||||
೨೦೦೩ | ಸ್ಕಾಟ್ಲೆಂಡ್ | ||||||||
೨೦೦೦ | ಕೆಂಟ್ | ||||||||
೨೦೦೮ – ೨೦೧೦ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ||||||||
೨೦೧೧ – ಪ್ರಸ್ತುತ | ರಾಜಸ್ಥಾನ್ ರಾಯಲ್ಸ್ | ||||||||
ವೃತ್ತಿಜೀವನದ ಅಂಕಿಅಂಶಗಳು | |||||||||
ಟೆಸ್ಟ್ | ODIಗಳು | FC | LA | ||||||
ಪಂದ್ಯಗಳು | ೧೬೪ | ೩೪೪ | ೨೯೮ | ೪೪೯ | |||||
ಒಟ್ಟು ರನ್ನುಗಳು | ೧೩,೨೮೮ | ೧೦,೮೮೯ | ೨೩೭೯೪ | ೧೫,೨೭೧ | |||||
ಬ್ಯಾಟಿಂಗ್ ಸರಾಸರಿ | ೫೨.೩೧ | ೩೯.೧೬ | ೫೫.೩೩ | ೪೨.೩೦ | |||||
೧೦೦/೫೦ | ೩೬/೬೩ | ೧೨/೮೩ | ೬೮/೧೧೭ | ೨೧/೧೧೨ | |||||
ಅತೀ ಹೆಚ್ಚು ರನ್ನುಗಳು | ೨೭೦ | ೧೫೩ | ೨೭೦ | ೧೫೩ | |||||
ಬೌಲ್ ಮಾಡಿದ ಚೆಂಡುಗಳು | ೧೨೦ | ೧೮೬ | ೬೧೭ | ೪೭೭ | |||||
ವಿಕೆಟ್ಗಳು | ೧ | ೪ | ೫ | ೪ | |||||
ಬೌಲಿಂಗ್ ಸರಾಸರಿ | 39.00 | ೪೨.೫೦ | ೫೪.೬೦ | ೧೦೫.೨೫ | |||||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | – | – | ೦ | – | |||||
೧೦ ವಿಕೆಟುಗಳು ಪಂದ್ಯದಲ್ಲಿ | – | – | – | – | |||||
ಶ್ರೇಷ್ಠ ಬೌಲಿಂಗ್ | ೧/೧೮ | ೨/೪೩ | ೨/೧೬ | ೨/೪೩ | |||||
ಕ್ಯಾಚುಗಳು /ಸ್ಟಂಪಿಂಗ್ಗಳು | ೨೧೦/0 | ೧೯೬/೧೪ | ೩೫೩/೧ | ೨೨೭/೧೭ | |||||
ದಿನಾಂಕ ಜನವರಿ ೩೦, ೨೦೧೨ ವರೆಗೆ. |
ರಾಹುಲ್ ದ್ರಾವಿಡ್ಗೆ, ೨೦೦೦ರಲ್ಲಿ, "ವಿಜಡನ್ ಕ್ರಿಕೆಟರ್" ಎಂದು ಗೌರವಿಸಲಾಗಿದೆ.[3] . ದ್ರಾವಿಡ್ಗೆ, ೨೦೦೪ರಲ್ಲಿ, ವರ್ಷದ ಐಸಿಸಿ ಪ್ಲೆಯರ್ ಹಾಗೂ ವರ್ಷದ ಟೆಸ್ಟ್ ಆಟಗಾರನೆಂದೂ ಸನ್ಮಾನಿಸಲಾಗಿದೆ.[4] . ರಾಹುಲ್ ದ್ರಾವಿಡ್, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ (೨೧೦) ಹಿಡಿದ ಆಟಗಾರರಾಗಿರುತ್ತಾರೆ.
೭ ಅಗಸ್ಟ್ ೨೦೧೧ ರಂದು, ಒಂದು ದಿನದ ಹಾಗೂ ಟಿ ೨೦ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು.[5] ೨೦೧೨ ಮಾರ್ಚಿ ೯ ರಂದು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ೨೦೧೩ ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ಇವರಿಗೆ ನೀಡಲಾಗಿದೆ.
ದಿನಾಂಕ ನವೆಂಬರ್ ೧ ೨೦೧೨ರಂದು ಸಿಡ್ನಿಯಲ್ಲಿ ನಡೆದ ಏಳನೆಯ ಬ್ರಾಡ್ಮನ್ ವಾರ್ಷಿಕ ಪುರಸ್ಕಾರ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಹಾಗು ಗ್ಲೆನ್ ಮ್ಯಾಕ್ಗ್ರಾಥ್ ಅವರುಗಳನ್ನು ಸನ್ಮಾನಿಸಲಾಯಿತು. ಭಾರತದ ಮೂರನೇ ಹಾಗು ನಾಲ್ಕನೆಯ ಅತ್ಯುಚ್ಚ ನಾಗರಿಕ ಸನ್ಮಾನವಾದ ಪದ್ಮ ಭೂಷಣ ಹಾಗು ಪದ್ಮ ಶ್ರೀ ಪುರಸ್ಕಾರಗಳಿಗೂ ಸಹ ರಾಹುಲ್ ದ್ರಾವಿಡ್ ಭಾಜನರಾಗಿದ್ದಾರೆ.
೨೦೧೪ರಲ್ಲಿ ಬೆಂಗಳೂರಿನ ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಲಹಾ ಮಂಡಳಿಯ ಸದಸ್ಯರಾಗಿ ರಾಹುಲ್ ದ್ರಾವಿಡ್ ಅವರು ಸೇರ್ಪಡೆಯಾದರು. ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಭಾರತದ ಭವಿಷ್ಯ ಒಲಿಂಪಿಕ್ ಸ್ಪರ್ಧಾಳುಗಳನ್ನು ರೂಪಿಸುವ ಯೋಜನೆಯಲ್ಲಿ ರಾಹುಲ್ ದ್ರಾವಿಡ್ ತೊಡಗಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ರವರ ನೇತೃತ್ವದ ಮೇಲಿನ ಯೋಜನೆಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಪ್ರನ್ನೊಯ್ ಕುಮಾರ್, ಈಜುಗಾರಾದ ಶರತ್ ಗಾಯಕ್ವಾಡ್ ಹಾಗು ಯುವ ಗೋಲ್ಫೆರ್ ಚಿಕ್ಕರಂಗಪ್ಪ ರವರು ಸ್ಪರ್ಧಾಳುಗಳನ್ನು ರೂಪಿಸುವ ಪ್ರಥಮ ತಂಡದ ತರಬೇತಿಯಲ್ಲಿ ಭಾಗಿಯಾಗಿದ್ದರು.