ಶ್ರೀಪಾದ ಅಮೃತ್ ಡಾಂಗೆ
From Wikipedia, the free encyclopedia
ಶ್ರೀಪಾದ ಅಮೃತ್ ಡಾಂಗೆ (೧೦ ಅಕ್ಟೋಬರ್ ೧೮೯೯ - ೨೨ ಮೇ ೧೯೯೧) ಒಬ್ಬ ಭಾರತೀಯ ರಾಜಕಾರಣಿ. ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸ್ಥಾಪಕ ಸದಸ್ಯರಾಗಿದ್ದರು. ಭಾರತೀಯ ಟ್ರೇಡ್ ಯೂನಿಯನ್ ಚಳವಳಿಯ ಮುಖ್ಯಸ್ಥರಾಗಿದ್ದರು. ೨೦ ನೇ ಶತಮಾನದಲ್ಲಿ ಕಮ್ಯುನಿಸ್ಟ್ ಮತ್ತು ಟ್ರೇಡ್ ಯೂನಿಯನ್ ಚಟುವಟಿಕೆಗಳಿಗಾಗಿ ಡಾಂಗೆಯನ್ನು ಅಧಿಕಾರಿಗಳು ಬಂಧಿಸಿದರು. ಅಲ್ಲದೆ ಅವರನ್ನು ೧೩ ವರ್ಷಗಳ ಅವಧಿ ಅವರನ್ನು ಜೈಲಿನಲ್ಲಿರಿಸಲಾಯಿತು.
ಭಾರತದ ಸ್ವಾತಂತ್ರ್ಯದ ನಂತರ, ಚೀನಾ-ಸೋವಿಯತ್ ವಿಭಜನೆ, ಚೀನಾ-ಭಾರತೀಯ ಯುದ್ಧ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕಡೆಗೆ ಪಕ್ಷದ ನಿಲುವಿನ ವಿವಾದಗಳಂತಹ ಘಟನೆಗಳ ಸರಣಿಯು ೧೯೬೪ ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಲ್ಲಿ ಪಕ್ಷದ ವಿಭಜನೆಗೆ ಕಾರಣವಾಯಿತು. ಒಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಸದಸ್ಯತ್ವ ಮತ್ತು ಭಾರತೀಯ ಚುನಾವಣೆಗಳಲ್ಲಿ ಅವರ ಸಾಧನೆ ಬಲವಾಗಿ ಹೊರಹೊಮ್ಮಿತು. ೧೯೭೮ ರವರೆಗೆ ಸಿಪಿಐ ಅಧ್ಯಕ್ಷರಾಗಿದ್ದ ಡಾಂಗೆ ಅವರನ್ನು ಆ ವರ್ಷದಲ್ಲಿ ತೆಗೆದುಹಾಕಲಾಯಿತು ಏಕೆಂದರೆ ಬಹುತೇಕ ಪಕ್ಷದ ಕಾರ್ಯಕರ್ತರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಬೆಂಬಲಿಸುವ ಡಾಂಗೆ ಅವರ ರಾಜಕೀಯ ಮಾರ್ಗವನ್ನು ಮತ್ತು ಅಂದಿನ ಕಾಂಗ್ರೆಸ್ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯನ್ನು ವಿರೋಧಿಸಿದರು. ಅದರಿಂದಾಗಿ ಅವರನ್ನು ೧೯೮೧ ರಲ್ಲಿ ಸಿಪಿಐನಿಂದ ಹೊರಹಾಕಲಾಯಿತು. ಅವರು ಅಖಿಲ ಭಾರತ ಕಮ್ಯುನಿಸ್ಟ್ ಪಕ್ಷ (ಎಐಸಿಪಿ) ಮತ್ತು ನಂತರ ಯುನೈಟೆಡ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರು. ಕೊನೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಚಳವಳಿಯಲ್ಲಿ ಡಾಂಗೆ ಹೆಚ್ಚು ಕಡೆಗಣಿಸಲ್ಪಟ್ಟರು. ಭಾರತದ ಮೊದಲ ಸಮಾಜವಾದಿ ವಾರಪತ್ರಿಕೆಯಾದ ಸಮಾಜವಾದಿ ಯ ಸಂಸ್ಥಾಪಕರಾಗಿದ್ದರು ಮತ್ತು ಪ್ರಸಿದ್ಧ ಬರಹಗಾರರಾಗಿದ್ದರು. ಮಹಾರಾಷ್ಟ್ರ ರಾಜ್ಯ ರಚನೆಯಲ್ಲಿ ಶ್ರೀಪಾದ ಅಮೃತ್ ಡಾಂಗೆ ಅವರು ಪ್ರಮುಖ ಪಾತ್ರ ವಹಿಸಿದ್ದರು.