ಹೈದರಾಲಿ
From Wikipedia, the free encyclopedia
ಸಯ್ಯದ್ ವಲ್ ಶರೀಫ್ ಹೈದರ್ ಅಲಿ ಖಾನ್ ಅಥವಾ ಹೈದರ್ ಅಲಿ (ಕ್ರಿ. ಶ. 1722 - 7 ಡಿಸೆಂಬರ್ 1782) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನರು. ಇವರು ಟಿಪ್ಪು ಸುಲ್ತಾನರ ತಂದೆ. ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು. ಮೊದಲು ಇವರು ಮೈಸೂರು ರಾಜರ ದಿಂಡಿಗಲ್ನ ಫೌಜುದಾರನಾಗಿದ್ದರು. ತನ್ನ ಸೈನಿಕ ಕಾರ್ಯಾಚರಣೆಗಳಿಂದಾಗಿ ಮೈಸೂರು ಒಡೆಯರಾಗಿದ್ದ ಚಿಕ್ಕಕೃಷ್ಣರಾಜ ಒಡೆಯರ್ ರವರ ದಳವಾಯಿ ಸ್ಥಾನಕ್ಕೇರಿದರು. ಕ್ರಮೇಣ 1761 ರಲ್ಲಿ ಮೈಸೂರಿನ ಸರ್ವಾಧಿಕಾರಿಯಾಗಿಯೂ, 1766 ರಲ್ಲಿ ಅವರ ಮರಣಾನಂತರ ಮೈಸೂರಿನ ವಾಸ್ತವ ಸುಲ್ತಾನನಾಗಿಯೂ ಅಧಿಕಾರ ವಹಿಸಿಕೊಂಡರು.
Quick Facts ಹೈದರ ಅಲಿ, ಆಳ್ವಿಕೆ ...
ಹೈದರ ಅಲಿ | |
---|---|
ನವಾಬ್ ಸಯ್ಯಿದ್ ವಲ್ ಷರೀಫ್ ಹೈದರ್ ಅಲಿ ಖಾನ್ ಬಹದ್ದೂರ್ | |
ಸರ್ವಾಧಿಕಾರಿ | |
ಆಳ್ವಿಕೆ | 1761-1782 |
ಪಟ್ಟಾಭಿಷೇಕ | 1766 ರಲ್ಲಿ ಮೈಸೂರಿನ ಸುಲ್ತಾನ್ |
ಪೂರ್ವಾಧಿಕಾರಿ | ಕೃಷ್ಣರಾಜ ವೊಡೆಯಾರ್ II |
ಉತ್ತರಾಧಿಕಾರಿ | ಟಿಪ್ಪು ಸುಲ್ತಾನ್ |
ಸಂತಾನ | |
ಟಿಪ್ಪು ಸುಲ್ತಾನ್ | |
ಪೂರ್ಣ ಹೆಸರು | |
ನವಾಬ್ ಸಯ್ಯಿದ್ ವಲ್ ಷರೀಫ್ ಹೈದರ್ ಅಲಿ ಖಾನ್ ಬಹದ್ದೂರ್(ಪತ್ನಿ:ಫಾತಿಮಾ ಫಖರ್-ಅನ್-ನಿಸಾ) | |
ತಂದೆ | ಫತ್ ಮಹಮ್ಮದ್ |
ತಾಯಿ | ಲಾಲ್ ಬೀ |
ಜನನ | ಕ್ರಿ.ಶ 1720 ಬೂದಿಕೋಟೆ, ಕೋಲಾರ, ಕರ್ನಾಟಕ |
ಮರಣ | ಡಿ. 7, 1782 (60–61 ವರ್ಷ) ಚಿತ್ತೂರು, ಆಂಧ್ರ ಪ್ರದೇಶ, ಭಾರತ |
Burial | ಶ್ರೀರಂಗಪಟ್ಟಣ, ಈಗಿನ ಮಂಡ್ಯ,ಕರ್ನಾಟಕ |
ಧರ್ಮ | ಇಸ್ಲಾಂ |
Close