ನಾನಾಜಿ ದೇಶಮುಖ್
From Wikipedia, the free encyclopedia
ಚಂಡಿಕಾದಾಸ್ ಅಮೃತರಾವ್ (ನಾನಾಜಿ) ದೇಶಮುಖ್ (ಅಕ್ಟೋಬರ್ ೧೧, ೧೯೧೬ - ಫೆಬ್ರುವರಿ ೨೭, ೨೦೧೦) ಭಾರತೀಯ ಜನಸಂಘ ಪಕ್ಷ ಮತ್ತು ಆರ್ ಎಸ್ ಎಸ್ ನ ಹಿರಿಯ ನಾಯಕ. ದೀನದಯಾಳ್ ಸಂಶೋಧನಾ ಕೇಂದ್ರದ ನೇತೃತ್ವ ವಹಿಸಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ, ನೈರ್ಮಲ್ಯ ಮತ್ತು ಗುಡಿಕೈಗಾರಿಕೆಗಳ ಸಬಲೀಕರಣಕ್ಕೆ ಕೊಡುಗೆ ಸಲ್ಲಿಸಿದುದಕ್ಕೆ ದೇಶ್ಮುಖರು ಖ್ಯಾತರಾಗಿದ್ದಾರೆ.