ವ್ಯಾಕರಣ
From Wikipedia, the free encyclopedia
ಸಂಸ್ಕೃತ ವ್ಯಾಕರಣ ಸಂಪ್ರದಾಯವಾದ vyākaraṇa (ಸಂಸ್ಕೃತ:व्याकरण, IPA: [ʋjɑːkərəɳə]) ಇದು ಆರು ವೇದಾಂಗ ಆಚಾರದ ವಿಧಿಗಳಲ್ಲಿ ಒಂದಾಗಿದೆ. ಇದರ ಮೂಲಗಳು ಹಿಂದಿನ ವೈದಿಕ ಭಾರತದ ಕಾಲಾವಧಿಯದ್ದಾಗಿದೆ ಮತ್ತು ಪ್ರಸಿದ್ಧ ಕೃತಿ Aṣṭādhyāyī, of Pāṇini (ಸಿ. 4ನೇ ಶತಮಾನ ಬಿಸಿಇ) ಅನ್ನು ಒಳಗೊಂಡಿದೆ.
ವೈದಿಕ ಗ್ರಂಥಪಾಠದ ಕರಾರುವಾಕ್ಕಾದ ವ್ಯಾಖ್ಯಾನವನ್ನು ಪಡೆಯುವ ಅಗತ್ಯತೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಭಾಷೆಯ ವಿಶ್ಲೇಷಣೆ ಮತ್ತು ವ್ಯಾಕರಣಕ್ಕಾಗಿನ ಆವೇಗವು ಪ್ರಾರಂಭವಾಯಿತು.
ತೀರಾ ಮೊದಲಿನ ಭಾರತೀಯ ವ್ಯಾಕರಣಜ್ಞರ ಕೃತಿಗಳು ನಾಶವಾಗಿವೆ; ಉದಾಹರಣೆಗಾಗಿ, ಸಾಕತಾಯಣ (ಸುಮಾರು 8 ನೇ ಶತಮಾನ. ಬಿಸಿಇ) ದ ಕೃತಿಯನ್ನು ಕೇವಲ ಯಸ್ಕ (ಸಿಎ. 6ನೇ-5ನೇ ಶತಮಾನ ಬಿಸಿಇ) ಮತ್ತು ಪಾಣಿನಿಯು ಮಾಡಿದ ಸಂಕ್ಷಿಪ್ತ ಉಲ್ಲೇಖಗಳಿಂದ ಮಾತ್ರ ತಿಳಿಯಬಹುದಾಗಿದೆ. ಮುಂದಿನ ಶತಮಾನಗಳಲ್ಲಿ ವಿವಾದವಾಗಿ ಪರಿಗಣಿಸಬಹುದಾದ ಸಾಕತಾಯಣದ ಒಂದು ಅಭಿಪ್ರಾಯವು ಹೇಳುವುದೇನೆಂದರೆ ಹೆಚ್ಚಿನ ನಾಮಪದಗಳು ವ್ಯುತ್ಪತ್ತಿಯ ಪ್ರಕಾರವಾಗಿ ಕ್ರಿಯಾಪದಗಳಿಂದ ಪಡೆಯಬಲ್ಲದ್ದಾಗಿದೆ.
ತಮ್ಮ ವ್ಯುತ್ಪತ್ತಿಶಾಸ್ತ್ರದ ಬಗ್ಗೆಯ ಅವಿಸ್ಮರಣೀಯ ಕೃತಿಯಾದ ನಿರುಕ್ತ ದಲ್ಲಿ ಯಸ್ಕ ಅವರು ತಮ್ಮ ವಾದವನ್ನು ಸಮರ್ಥಿಸಿಕೊಂಡರು ಮತ್ತು ಅದಕ್ಕೆ ಅವರು ಕೊಟ್ಟ ಆಧಾರವೆಂದರೆ ಕೃತ್-ಪ್ರತ್ಯಯ ಎಂದು ಕರೆಯಲಾಗುವ ವ್ಯುತ್ಪತ್ತಿ ಪ್ರಕ್ರಿಯೆಯ ಮೂಲಕ ಕ್ರಿಯಾಪದದಿಂದ ಬಹಳಷ್ಟು ಸಂಖ್ಯೆಯ ನಾಮಪದಗಳು ವ್ಯುತ್ಪತ್ತಿಯಾಗಿವೆ ಎಂಬುದಾಗಿತ್ತು ; ಇದು ಬೇರು ಮಾರ್ಫೀಮ್ನ ಗುಣ ಸ್ವರೂಪಕ್ಕೆ ಸಂಬಂಧ ಕಲ್ಪಿಸುತ್ತದೆ.
ಯಸ್ಕ ಅವರು ಮತ್ತೊಂದು ಚರ್ಚೆಗೂ ಕೂಡ ಧಾತುವನ್ನು ಒದಗಿಸಿದರು, ಅದು ಪದದಲ್ಲಿ ಗ್ರಂಥಪಾಠದ ಅರ್ಥಗಳು ಅಂತರ್ಗತವಾಗಿರುತ್ತವೆಯೇ (ಯಸ್ಕ ಅವರ ಅಭಿಪ್ರಾಯ) ಅಥವಾ ವಾಕ್ಯದಲ್ಲಿ ಅಂತರ್ಗತವಾಗಿರುತ್ತದೆಯೇ ಎಂಬುದಾಗಿತ್ತು (ಪಾಣಿನಿ, ಮತ್ತು ನಂತರದ ವ್ಯಾಕರಣಜ್ಞರಾದ ಪ್ರಭಾಕರ ಅಥವಾ ಭಾರ್ತ್ರಿಹರಿ ಅವರನ್ನು ನೋಡಿ). ಈ ಚರ್ಚೆಯು 14 ಮತ್ತು 15 ನೇ ಶತಮಾನದವರೆಗೆ ಸಿಇ ವರೆಗೆ ಮುಂದುವರಿಯಿತು ಮತ್ತು ಶಬ್ಧಾರ್ಥಕ್ಕೆ ಸಂಬಂಧಿಸಿದ ಸಂಯೋಜನೆಗೊಳಿಸುವಿಕೆ ಬಗೆಗಿನ ಪ್ರಸ್ತುತ ಚರ್ಚೆಗಳಲ್ಲೂ ಅದರ ಪ್ರತಿಧ್ವನಿಯನ್ನು ಹೊಂದಿದೆ.