ಐತರೇಯೋಪನಿಷತ್
From Wikipedia, the free encyclopedia
ಐತರೇಯ ಉಪನಿಷತ್, ಋಗ್ವೇದಕ್ಕೆ ಸೇರಿದ ಐತರೇಯ ಅರಣ್ಯಕದ, ಎರಡನೇ ಅರಣ್ಯಕದ ಭಾಗ. ಎರಡನೇ ಅರಣ್ಯಕದ ನಾಲ್ಕನೆಯ, ಐದನೆಯ ಮತ್ತು ಆರನೆಯ ಅಧ್ಯಾಯಗಳೇ ಐತರೇಯ ಉಪನಿಷತ್. ಶಂಕರಾಚಾರ್ಯರು ಭಾಷ್ಯ ಬರೆದಿರುವ ಪ್ರಮುಖವಾದ ದಶೋಪನಿಷತ್ತುಗಳಲ್ಲಿ ಇದೂ ಒಂದು.ಬಹ್ನೃಚೋಪನಿಷತ್ತೆಂತಲೂ ಮಹಾ ಐತರೇಯ ಉಪನಿಷತ್ತೆಂತಲೂ ಇದಕ್ಕೆ ಹೆಸರುಗಳಿವೆ. ಆರಣ್ಯಕ ಮತ್ತು ಉಪನಿಷತ್ತುಗಳನ್ನು ವಿಂಗಡಿಸಿ ಇದಿಷ್ಟು ಆರಣ್ಯಕ, ಇದು ಉಪನಿಷತ್ತು ಎಂದು ಪರಿಗಣಿಸುವುದರಲ್ಲಿ ಅಭಿಪ್ರಾಯ ಭೇದವಿದೆ. ಮಹೀದಾಸ ಐತರೇಯ ಇದರ ಋಷಿ (ಮಂತ್ರದೃಕ್). ಅದರಿಂದ ಇದಕ್ಕೆ ಈ ಹೆಸರು. ಈತ ವಿಶಾಲಾ ಎಂಬಾಕೆಯ ಪುತ್ರನೆಂದೂ ಶ್ರೀಮನ್ನಾರಾಯಣನ ಅವತಾರವೆಂದೂ ಮಧ್ವಾಚಾರ್ಯರ ಭಾವನೆ. ಇತರಾ ಎಂಬುವಳ ಮಗ ಮಹಿದಾಸ. ಯಜ್ಞಸಭೆಗಳಲ್ಲಿ ತಂದೆ ತನ್ನ ಇತರ ಪತ್ನಿಯರ ಮಕ್ಕಳೊಡನೆ ಈತನನ್ನು ತೊಡೆಯ ಮೇಲೆ ಕೂರಿಸಿಕೊಳ್ಳದೆ ತಾತ್ಸಾರ ತೋರಿಸಲು, ಕರುಳು ನೊಂದ ತಾಯಿ ತನ್ನ ಕುಲದೈವ ಮಹೀ(ಭೂಮಿ) ದೇವಿಯನ್ನು ಪ್ರಾರ್ಥಿಸಲು ಆಕೆಯ ವರಪ್ರಸಾದದಿಂದ ಈತನಿಗೆ ಅಸಮಾನವಾದ ದಿವ್ಯಜ್ಞಾನ ಸಿದ್ಧಿಸಿತು-ಎನ್ನುವ ಈ ಐತಿಹ್ಯವೊಂದನ್ನು ಸಾಯಣರು ಉಲ್ಲೇಖಿಸುತ್ತಾರೆ. ಸಂಪ್ರದಾಯದ ನಂಬಿಕೆಯ ಪ್ರಕಾರ ಮಹೀದಾಸನೆಂಬ ಋಷಿಯಿಂದ ಪ್ರಕಾಶಿಸಲ್ಪಟ್ಟಿದೆ. ಈ ಉಪನಿಷತ್ತಿನಲ್ಲಿ ನಾಲ್ಕು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವೂ ಅಧ್ಯಯನ ಅನುಕೂಲಕ್ಕಾಗಿ ಸಣ್ಣ-ಸಣ್ಣ ಖಂಡಗಳಾಗಿ ವಿಭಜಿಸಲ್ಪಟ್ಟಿದೆ. ಇದು ಅತಿ ಪುರಾತನವಾದ ಗದ್ಯರೂಪದಲ್ಲಿದೆ, ಪುರಾತನವಾದ ಉಪನಿಷತ್ತುಗಳಲ್ಲಿ ಇದೂ ಒಂದು. ಇರುವುದು ಚಿಕ್ಕ ಚಿಕ್ಕ ಮೂರೇ ಅಧ್ಯಾಯಗಳು. ಒಟ್ಟು ಐದು ಖಂಡಗಳೆಂಬ ಉಪವಿಭಾಗಗಳು.
ಹಿಂದೂ ಧರ್ಮಗ್ರಂಥಗಳು |
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |